`ಬೆತ್ತನಗೆರೆ` ಈ ವಾರ ಬಿಡುಗಡೆ
Posted date: 28 Wed, Oct 2015 – 11:39:25 AM

ಸವಿಕ ಎಂಟೆರ್ಪ್ರೈಸಸ್ ಅಡಿಯಲ್ಲಿ ಬಿ ಎನ್ ಸ್ವಾಮಿ ನಿರ್ಮಾಣದ, ಮೋಹನ್ ಗೌಡ ಅವರ ಕಥೆ, ಚಿತ್ರಕಥೆ, ನಿರ್ದೇಶನ ಇರುವ ‘ಬೆತ್ತನಗೆರೆ’ ...ಎ ರಾ ಸ್ಟೋರಿ! ಇಬ್ಬರು ಹೆಸರಾಂತ ನಿರ್ಮಾಪಕರುಗಳ ಮಕ್ಕಳು ಅಕ್ಷಯ್ ಹಾಗೂ ಸುಮಂತ್ ಸಹೋದರರಾಗಿ ಅಭಿನಯಿಸಿರುವ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ.

ಕ್ರಿಕೆಟ್ ಆಟಗಾರ ವಿನೋದ್ ಕಾಂಬ್ಳಿ ಕನ್ನಡ ಸಿನೆಮಾ ‘ಬೆತ್ತೆನೆಗೆರೆ’ ಸಿನಿಮಾದಲ್ಲಿ ಒಂದು ವಿಶೇಷ ಪಾತ್ರವನ್ನು ಮಾಡಿದ್ದಾರೆ.

ಮೈಸೂರು, ಶ್ರೀರಂಗಪಟ್ಟಣ, ಕನಕಪುರ, ನೆಲಮಂಗಲ ಸುತ್ತಲೂ ಚಿತ್ರೀಕರಣ ಮಾಡಿರುವ ‘ಬೆತ್ತೆನೆಗೆರೆ’ ಸಿನೆಮಕ್ಕೆ ಚಿತ್ರೀಕರಣ ಮಾಡಲಾಗಿದೆ.
ಮೋಹನ್ ನಿರ್ದೇಶಕರಾಗಿ ಬೆಡ್ರಪ್ಪ ಬೇಡಿ ಈ ರೌಡಿಗಳಾಗಿ ಜೀವನ ಹಾಳು ಮಾಡಿಕೊಳ್ಳಬೇಡಿ ಎಂದು ಕರೆ ಕೊಡುತ್ತಿದ್ದಾರೆ. ನಯನ ಈ ಚಿತ್ರದ ನಾಯಕಿ. ಮುನಿರಾಜ್, ಶೋಬಾರಾಜ್, ಅವಿನಾಷ್, ಬುಲ್ಲೆಟ್ ಪ್ರಕಾಷ್, ವೀಣ ಸುಂದರ್ ಹಾಗೂ ಇತರರು ಪೋಷಕ ಕಲಾವಿದರುಗಳು.
‘ಬೆತ್ತೆನೆಗೆರೆ’ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಮುಕುಂದ, ಎಚ್ ಸಿ ವೇಣು ಛಾಯಾಗ್ರಹಣ, ರಾಜೇಶ್ ರಾಮನಾಥ್ ಅವರ ಸಂಗೀತ, ಲಿಂಗರಾಜು ಅವರ ಸಂಕಲನ, ಮಾಲೂರ್ ಶ್ರೀ ನಿವಾಸ್ ಅವರ ನೃತ್ಯ, ವೆಂಕಟೇಶ್, ಡಿಫರೆಂಟ್ ಡ್ಯಾನಿ ಅವರ ಸಾಹಸ ಈ ಚಿತ್ರಕ್ಕಿದೆ.  

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed